ಈ ಪಾಶುರಂನಲ್ಲಿ ಗೋದಾದೇವಿ ತನ್ನ ಸಖಿಯರನ್ನು ವ್ರತದ ಸ್ನಾನಕ್ಕಾಗಿ ಕರೆಯುತ್ತಿದ್ದಾಳೆ. ವ್ರತಾಚರಣಕ್ಕೆ ಅನುಕೂಲವಾದ ಕಾಲದ ವರ್ಣನೆ, ತನ್ನ ಸಖಿಯರ ಸೌಂದರ್ಯ (ಶೆಲ್ವಚ್ಚಿರು ಮೀರ್ ಕಾಳ್) ವರ್ಣನೆ, ಕೃಷ್ಣನ ತಂದೆಯ ವಿವರಣೆ, ಆತನ ತಾಯಿಯ ಭಾಗ್ಯ, ಅಂತಹ ಮಾತಾಪಿತೃಗಳಿಗೆ ಮಗನಾಗಿ ಅವತರಿಸಿದ ನಾರಾಯಣನ ಗುಣಾನುವರ್ಣನೆ ಹೇಳಿಯಾದ ಮೇಲೆ ಭಗವಂತನ ಶರಣಾಗತ ವಾತ್ಸಲ್ಯವನ್ನು ಕೊಂಡಾಡಿ ಅವನಲ್ಲಿ ತನಗಿರುವ ಭರವಸೆಯನ್ನು ಹೇಳಿಕೊಳ್ಳುತ್ತಾಳೆ