close logo

ದೀಪಾವಳಿಯ ಬೆಳಕು: ಡಾ|| ಆರತಿಯವರ ಜೊತೆ ಒಂದು ಸಂವಾದ

ದೀಪಾವಳಿ ಭಾರತೀಯರ ಬಹುಪ್ರಮುಖ ಹಬ್ಬಗಳಲ್ಲಿ ಒಂದು. ದೇಶದಾದ್ಯಂತ, ಪ್ರತಿಯೊಂದು ಪ್ರದೇಶದಲ್ಲೂ ದೀಪಾವಳಿಯನ್ನು ಅತಿಸಂಭ್ರದಿಂದ ಆಚರಿಸುತ್ತಾರೆ. ಕರ್ನಾಟಕದಲ್ಲಿ ನಾಲ್ಕು ದಿನಗಳ ಹಬ್ಬವಾದರೂ ಮೂರು ದಿನಗಳಂತೂ ವಿಶೇಷ ಸಂಭ್ರಮವಿರುತ್ತದೆ. ಅನೇಕ ಆಚರಣೆಗಳು, ವಿಶಿಷ್ಟ ಪೂಜೆ, ಅನೇಕ ರೀತಿಯ ಸಂಭ್ರಮ – ಹೀಗೆ ಹಬ್ಬದ ಪ್ರತಿಯೊಂದು ಕ್ಷಣವೂ ಒಂದು ವಿಶೇಷ ಅನುಭವ. ಪಟಾಕಿಯ ಸದ್ದಿನಿಂದ ನರಕಾಸುರನನ್ನು ಸುಟ್ಟರೆ, ದೀಪಗಳ ದಿವ್ಯಮೌನದಲ್ಲಿ ಬಲೀಂದ್ರನನ್ನು ನೆನೆಸಿಕೊಳ್ಳುತ್ತೇವೆ. ಇತಿಹಾಸ-ಪುರಾಣಗಳಲ್ಲಿ, ಕಾವ್ಯದಲ್ಲಿ ದೀಪವಾಳಿಯ ಆ ಕಾಲದ ಸಂಭ್ರಮವನ್ನು ನಾವು ಕಾಣಬಹುದು.

ಹೀಗೆ ನಮ್ಮ ಪ್ರಜ್ಞೆಯ ಆಳದಲ್ಲಿ ಭದ್ರವಾಗಿರುವ ದೀಪಾವಳಿಯ ದಿನ ಒಂದು ವಿಶಿಷ್ಟ ಸಂವಾದವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲು ಇಂಡಿಕಾ ಟುಡೇ ಸಂತೋಷ ಪಡುತ್ತದೆ. ಸಂಸ್ಕೃತಿ ಚಿಂತಕರಾದ ಡಾ|| ಆರತಿ ವಿ.ಬಿ. ನಿಮಗೆ ಗೊತ್ತಲ್ಲವೇ? ಅವರು ವಿಭು ಅಕ್ಯಾಡಮಿಯ ಸ್ಥಾಪಕ ಮುಖ್ಯಸ್ಥರು, ಸಂಸ್ಕೃತ ಅಧ್ಯಾಪಕರು ಮತ್ತು ಸಂಸ್ಕೃತಿ ಚಿಂತಕರು. ನಮ್ಮ ದೀಪಾವಳಿಯ ಸಾಂಸ್ಕೃತಿಕ ಪರಂಪರೆ, ಭಾರತೀಯ ಸಮಾಜದ ಇವತ್ತಿನ ಸ್ಥಿತಿ-ಗತಿ, ತಮ್ಮ ವಿಭು ಅಕ್ಯಾಡಮಿ ಭಾರತೀಯ ಸಂಸ್ಕೃತಿಯನ್ನು ಹರಡುತ್ತಿರುವ ಬಗೆ ಇವೆಲ್ಲದರ ಕುರಿತು ಅವರೊಂದಿಗೆ ನಡೆಸಿದ ಒಂದು ಚಿಕ್ಕ ಸಂವಾದ ಇಲ್ಲಿದೆ.

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply